Property: ತಂದೆ, ತಾತ, ಮುತ್ತಾತನ ಹೆಸರಿನಲ್ಲಿರುವ ಜಮೀನನ್ನು ವರ್ಗಾವಣೆ ಮಾಡ್ಕೊಬೇಕಾ.? ಇಲ್ಲಿದೆ ನಿಮಗೊಂದು ಸುವರ್ಣಾವಕಾಶ.!

Property

ರಾಜ್ಯ ಸರ್ಕಾರ ಆಗಾಗ್ಗೆ ಸಾಮಾನ್ಯ ಜನತೆಗೆ ಸಂತೋಷದ ಸುದ್ದಿಯನ್ನು ಕೊಡುತ್ತಲೇ ಇರುತ್ತದೆ. ಇದೀಗ ರಾಜ್ಯದ ಎಲ್ಲಾ ರೈತರಿಗೆ ಒಂದು ಬಂಪರ್ ಕೊಡುಗೆಯನ್ನು ನೀಡಿದೆ. ನಿಮ್ಮ ಜಮೀನನ್ನು ನೀವೇ ಉಳುಮೆ ಮಾಡುತ್ತಿದ್ದು, ಅದರ ಪಹಣಿ ಮಾತ್ರ ನಿಮ್ಮ ತಂದೆ, ತಾತ ಅಥವಾ ಅವರ ತಂದೆ ಹೀಗೆ ನಿಮ್ಮ ಪೂರ್ವಜರ ಹೆಸರಿನಲ್ಲಿ ಇದ್ದರೆ ಅದನ್ನು ಈಗ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಈಗ ರೈತರಿಗೆ ಒಂದು ಸುವರ್ಣ ಅವಕಾಶವನ್ನು ನೀಡಿದೆ.

WhatsApp Group Join Now
Telegram Group Join Now

ನಿಮ್ಮ ಪೂರ್ವಜರ ಹೆಸರಿನಲ್ಲಿ ಇರುವಂತಹ ನಿಮ್ಮ ಜಮೀನನ್ನು ನಿಮ್ಮ ಹೆಸರಿಗೆ ಹೇಗೆ ಬದಲಾಯಿಸಿಕೊಳ್ಳಬಹುದು? ಅಥವಾ ಹೇಗೆ ವರ್ಗಾವಣೆ ಮಾಡಿಕೊಳ್ಳಬಹುದು? ಎನ್ನುವ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಾಕಷ್ಟು ಜನ ರೈತರ ಜಮೀನುಗಳು ಈಗ ಉಳುಮೆ ಮಾಡುತ್ತಾ ಇರುವವರ ಹೆಸರಿಗೆ ಇಲ್ಲದೆಯೇ ರೈತರು ತಮಗೆ ಬೇಕಾದ ಸಂದರ್ಭದಲ್ಲಿ ಬ್ಯಾಂಕ್ ಗಳಿಂದ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಮತ್ತು ವಿಮೆ ಹಣದ ಸೌಲಭ್ಯ ಕೂಡಾ ದೊರೆಯುತ್ತಿಲ್ಲ. ಇನ್ನು ಖಾತೆಯನ್ನು ಬದಲಾವಣೆ ಮಾಡಿಕೊಳ್ಳುವ ಸಲುವಾಗಿ ರೈತರು ಹಲವಾರು ಬಾರಿ ಕಚೇರಿಗಳಿಗೆ ಅಲೆದಾಡುತ್ತಲೆ ಇರಬೇಕು.

ಈ ಮೂಲಕ ಇದು ಕೃಷಿ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಉಂಟು ಮಾಡಿತ್ತು ಪೌತಿ ಖಾತೆ ಬದಲಾವಣೆಗೆ ಇದ್ದಂತಹ ನಿಯಮವನ್ನು ಸಡಿಲ ಮಾಡಿ , ಆಂದೋಲನ ರೂಪದಲ್ಲಿ ಖಾತೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಜಮೀನಿನ ಪಹಣಿ ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಇದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವ ವಿಧಾನವನ್ನು ತುಂಬ ಸರಳೀಕರಣ ಮಾಡಲಾಗಿದ್ದು ರೈತರ ಜಮೀನಿನ ಪಹಣಿಯು ತಂದೆಯ ಹೆಸರಿನಲ್ಲಿ ಅಥವಾ ತಾತನ ಹೆಸರಿನಲ್ಲಿ ಅಥವಾ ಮುತ್ತಾತನ ಹೆಸರಿನಲ್ಲಿ ಇದ್ದು, ಅವರು ಮರಣ ಹೊಂದಿದ್ದರೆ ಅಂಥವರ ಹೆಸರಿನಲ್ಲಿ ಇರುವ ಜಮೀನಿನ ಪಹಣಿಯಲ್ಲಿ ಪ್ರಸ್ತುತ ಉಳುಮೆ ಮಾಡುತ್ತಿರುವ ಮಕ್ಕಳು ಅವಕಾಶವನ್ನು ನೀಡಲಾಗಿದೆ.

ರಾಜ್ಯ ಸರ್ಕಾರದಿಂದ ಪೌತಿ ಖಾತೆ ಆಂದೋಲನವನ್ನು ಜಾರಿಗೆ ತರಲಾಗಿದ್ದು, ಈ ಮೂಲಕ ರೈತರು ಸರಳವಾಗಿ ಪ್ರಸ್ತುತ ಉಳುಮೆ ಮಾಡುತ್ತಿರುವ ಜಮೀನಿನ ಪಹಣಿ ತಂದೆಯ ಹೆಸರಿನಲ್ಲಿ ಅಥವಾ ತಾತನ ಹೆಸರಿನಲ್ಲಿ ಅಥವಾ ಮುತ್ತಾತನ ಹೆಸರಿನಲ್ಲಿ ಇದಲ್ಲಿ ಬ್ಯಾಂಕಿನಿಂದ ಸಾಲ ಪಡೆಯಲು, ವಿಮೆ ಹಣದ ಸೌಲಭ್ಯ ಪಡೆಯಲು ಮತ್ತು ಸರಕಾರದ ವಿವಿಧ ಇಲಾಖೆಗಳಿಂದ ಯಾವುದೇ ಸಹಾಯಧನ ಆದಾರಿತ ಸೌಲಭ್ಯ ಪಡೆಯಲು ಅರ್ಹರಾಗುವುದಿಲ್ಲ.

ಈ ಎಲ್ಲಾ ಕಾರಣಗಳಿಂದ ರೈತರು ಖಾತೆ ಬದಲಾವಣೆಗಾಗಿ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿದ್ದು, ಇದು ಕೃಷಿ ಅಭಿವೃದ್ಧಿಯ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಿದೆ. ಪೌತಿ ಖಾತೆ ಬದಲಾವಣೆಗೆ ಇದ್ದ ನಿಯಮವನ್ನು ಸಡಿಲಗೊಳಿಸಿ ಆಂದೋಲನ ರೂಪದಲ್ಲಿ ರಾಜ್ಯ ಸರ್ಕಾರ ಕಾರ್ಯಕ್ರಮ ಅನುಷ್ಥಾನ ಮಾಡಲಾಗುತ್ತಿದೆ.

ಈಗಾಗಲೇ ಇರುವ ಜಮೀನಿನ ವಾರಸುದಾರ ಮರಣ ಹೊಂದಿದ ನಂತರ ಜಮೀನಿನ ಖಾತೆಗೆ ಸಾಕಷ್ಟು ಸಮಯದಿಂದ ಕಾಯುತ್ತಾ ಇರುವ ಅನೇಕ ಕುಟುಂಬಗಳಿಗೆ ಇದೊಂದು ಶುಭ ಸುದ್ದಿ ಎನ್ನಬಹುದು. ಹಾಗಾದರೆ, ಜಮೀನಿನ ಪಹಣಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ? ಎಂದು ನೋಡುವುದಾದರೆ , ಸರ್ಕಾರವು ಸೂಚಿಸಿರುವ ಮೂಲಗಳಿಂದ ವ್ಯಕ್ತಿಯು ಮರಣ ಹೊಂದಿದ ವಿವರಗಳನ್ನು ಪಡೆದುಕೊಳ್ಳಬೇಕು.

ಮ.ರಣ ಪ್ರಮಾಣ ಪತ್ರ ಮತ್ತು ವಂಶ ವೃಕ್ಷ ಪ್ರಮಾಣ ಪತ್ರವನ್ನು ಪಡೆದು ಭೂಮಿ ತಂತ್ರಾಂಶ, ಪೌತೀ ಖಾತೆಗಾಗಿ ನಮೂನೆ ಒಂದರಲ್ಲಿ ದಾಖಲಿಸಬೇಕು. ಒಂದುವೇಳೆ ವಂಶ ವೃಕ್ಷ ಪ್ರಮಾಣ ಪತ್ರ ಲಭ್ಯ ಇಲ್ಲದೇ ಇದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜೀ ಜನಸ್ನೇಹಿ ಕೇಂದ್ರ ( ನಾಡ ಕಚೇರಿ) ಅಥವಾ ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು.

ಒಂದು ವೇಳೆ ವ್ಯಕ್ತಿಯು ಮ.ರಣ ಹೊಂದಿ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಆಗಿದ್ದರೆ , ಮರಣ ಪ್ರಮಾಣ ಪತ್ರಕ್ಕಾಗಿ ನೋಂದಣಿ ಇಲ್ಲದೆ ಇದ್ದರೆ ಸಂಬಂಧ ಪಟ್ಟ ನ್ಯಾಯಾಲಯದಲ್ಲಿ ಮ.ರಣ ಹೊಂದಿದ ಕುರಿತು ಆದೇಶವನ್ನು ಪಡೆದು ತಹಶೀಲ್ದಾರ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆಯಬೇಕು.

ಅಥವಾ ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಈ ದಾಖಲೆಗಳನ್ನು ಪರಿಶೀಲಿಸಿಕೊಂಡು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಶ್ವ ನಿರೀಕ್ಷಕರು ಸ್ಥಳ ಪರಿಶೀಲನೆ ಮಹಜರ್ ಮಾಡಿ ಮ.ರಣ ಹೊಂದಿದ ಬಗ್ಗೆ ಸಂಬಂಧ ಪಟ್ಟ ವಾರಸುದಾರರಿಂದ ಆಫ್ಡಿವೆಟ್ ಪಡೆದು ಅವರ ಆಧಾರ್ ಕಾರ್ಡ್, ರೇಶನ್ ಕಾರ್ಡ್ ಇವುಗಳ ಸಹಾಯದಿಂದ ಅರ್ಜಿ ಹಾಕಬಹುದು.

ಇಂತಹ ಪೌತಿ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಶುಲ್ಕದಲ್ಲಿ ರಾಜ್ಯ ಸರ್ಕಾರ ವಿನಾಯತಿ ನೀಡಿದೆ. ಹಕ್ಕು ಬದಲಾವಣೆ ಪ್ರಕರಣದಲ್ಲಿ ನಮೂನೆ 11 ಮತ್ತು ನಮೂನೆ 31 ಇದನ್ನು ಹೊರಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಿಟೇಷನ್ ವಿಲೇವಾರಿಗೆ ಮೂವತ್ತು ದಿನಗಳ ಕಾಲ ಕಾಲಾವಕಾಶ ನೀಡಲಾಗಿದ್ದು, ಆಸಕ್ತರು ತಕರಾರನ್ನು ಸಲ್ಲಿಸಬಹುದಾಗಿದೆ.

ಒಂದು ವೇಳೆ ಯಾರಾದರೂ ತಕರಾರು ಅರ್ಜಿ ಸಲ್ಲಿಸಲು ಮುಂದೆ ಬಂದರೆ ಹೊಬಳಿಗಳಿಗೆ ಗ್ರೇಡ್ ಒನ್ ತಹಶೀಲ್ದಾರ್ ಮತ್ತು ಗ್ರೇಡ್ ಟೂ ತಹಶೀಲ್ದಾರ್ ಗೆ ಹೊಣೆ ನೀಡಲಾಗಿದ್ದು ಆಯಾ ಹೋಬಳಿಗಳಿಗೆ ಒಂದು ತಿಂಗಳ ಕ್ಯಾಂಪ್ ಮಾಡಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು.

ಒಂದೊಮ್ಮೆ ವಂಶವೃಕ್ಷ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜೀ ಜನಸ್ನೇಹಿ ಕೇಂದ್ರ/ನಾಡಕಚೇರಿ/ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಇದರ ಜೊತೆಗೆ ವ್ಯಕ್ತಿಯು ಮ.ರಣ ಹೊಂದಿ ಒಂದು ವರ್ಷಕ್ಕಿಂತಲೂ ಕೂಡ ಬಹುಕಾಲ ಆಗಿದ್ದರೆ ಮ.ರಣ ಪ್ರಮಾಣ ಪತ್ರಕ್ಕಾಗಿ ನೋಂದಣಿ ಇರದಿದ್ದರೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮ.ರಣ ಹೊಂದಿದ ಕುರಿತು ಆದೇಶವನ್ನು ಪಡೆದು ತಹಶೀಲ್ದಾರ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆಯಬೇಕು.

ಅಥವಾ ಆಧಾರ ಕಾರ್ಡ್ ಮತ್ತು ರೇಶನ್ ಕಾರ್ಡ್ ಈ ದಾಖಲೆಗಳು ಪರಿಶೀಲಿಸಿಕೊಂಡು ಗ್ರಾಮಲೆಕ್ಕಾಧಿಕಾರಿಯವರು ಮತ್ತು ರಾಜಸ್ವ ನಿರೀಕ್ಷಕರು ಸ್ಥಳ ಪರಿಶೀಲನೆ, ಮಹಜರ್ ಮಾಡಿ ಮರಣ ಹೊಂದಿದ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡೆವಿಟ್ ಪಡೆದು ಅವರ ಆಧಾರ ಕಾರ್ಡ್, ರೇಶನ್ ಕಾರ್ಡ್ ಲಿಂಕ್ ಮೆಲೆ ಅರ್ಜಿಯನ್ನು ಹಾಕಬಹುದಾಗಿದೆ.

ಈ ರೀತಿಯ ಪೌತಿ ಖಾತೆಯನ್ನು ಬದಲಾವಣೆಗೆ ಸಂಬಂಧಪಟ್ಟಂತೆ ಮ್ಯುಟೆಶನ್ ಶುಲ್ಕದಲ್ಲಿ ರಾಜ್ಯ ಸರ್ಕಾರ ರಿಯಾಯಿತಿಯನ್ನು ನೀಡಿದೆ. ಹಕ್ಕು ಬದಲಾವಣೆ ಪ್ರಕರಣದಲ್ಲಿ ನಮೂನೆ 12 ಮತ್ತು ನಮೂನೆ 21 ನ್ನು ಹೊರಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮ್ಯುಟೇಷನ್ ವಿಲೇವಾರಿಗೆ 30 ದಿನಗಳಕಾಲ ಕಾಲಾವಕಾಶ ನೀಡಲಾಗಿದ್ದು, ಆಸಕ್ತರು ತಕರಾರನ್ನು ಸಲ್ಲಿಸಬಹುದಾಗಿದೆ.

ಒಂದು ವೇಳೆ ತಕರಾರು ಅರ್ಜಿ ಸಲ್ಲಿಸಿದಲ್ಲಿ ಹೋಬಳಿಗಳಿಗೆ ಗ್ರೇಡ್-1 ತಹಶೀಲ್ದಾರ ಮತ್ತು ಗ್ರೇಡ್-2 ತಹಶೀಲ್ದಾರಗೆ ಹೊಣೆಯನ್ನು ನೀಡಲಾಗಿದ್ದು, ಆಯಾ ಹೋಬಳಿಯಲ್ಲಿ ಒಂದು ತಿಂಗಳೊಳಗೆ ಕ್ಯಾಂಪ್ ಮಾಡಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು.

ಪೌತಿ ಖಾತೆ ಅಥವಾ ನಿಮ್ಮ ಹೆಸರಿಗೆ ಜಮೀನಿನ ಪಹಣಿ ಮಾಡಿಕೊಳ್ಳಲು ನಮೂನೆ-1 ಈ ಅರ್ಜಿಯನ್ನು ನಾಡಕಚೇರಿಯಲ್ಲಿ ಪಡೆದುಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಬವುದು.

ನಿಮ್ಮ ಮೊಬೈಲ್ ನಲ್ಲೆ ಪಹಣಿ/ಖಾತೆ/ಊತಾರ್ ವಿವರ ಪಡೆಯಲು ಹೀಗೆ ಮಾಡಿ…

https://landrecords.karnataka.gov.in/Service2/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ-ತಾಲ್ಲೂಕು-ಹೋಬಳಿ-ಗ್ರಾಮ-ಸರ್ವೆ ನಂಬರ್-ಇತರೇ ವಿವರ ಹಾಕಿ ನಿಮ್ಮ ಪಹಣಿ ವಿವರ ಪಡೆಯಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment