Ration Card cancellation: ರಾಜ್ಯದಲ್ಲಿ 50 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಆದೇಶ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ.!

Ration Card

ರೇಷನ್ ಕಾರ್ಡ್(ration card) ದೇಶದ ಸಾಮಾನ್ಯ ಜನರ ಪಾಲಿನ ಪ್ರಮುಖ ದಾಖಲೆ(important document)ಯಾಗಿದೆ. ರೇಷನ್ ಕಾರ್ಡ್ ಮೂಲಕ ಬಡತನ ರೇಖೆಯಲ್ಲಿರುವ ಜನರು ಕೇಂದ್ರ, ರಾಜ್ಯ ಸರ್ಕಾರ ನೀಡುವ ಸವಲತ್ತುಗಳನ್ನು ಪಡೆಯುತ್ತಿದೆ. ಆದ್ರೆ, ಇದನ್ನು ಧನವಂತರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳು ಮುಂದಾಗಿವೆ.

ಈ ಸುದ್ದಿ ಓದಿ:-Aadhaar Card Update: ಆಧಾರ್‌ ಕಾರ್ಡ್‌ನಲ್ಲಿ ʻವಿಳಾಸʼ ಬದಲಾವಣೆಗೆ ಇನ್ಮುಂದೆ ಈ ದಾಖಲೆಗಳು ಕಡ್ಡಾಯ.!

ಹೌದು, ಅನರ್ಹ ಬಿಪಿಎಲ್ ರೇಷನ್ ಕಾರ್ಡ್ (Ineligible BPL card) ರದ್ದು ಕಾರ್ಯ ಚುರುಕುಗೊಂಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ರಾಜ್ಯದಲ್ಲಿ ನಕಲಿ ದಾಖಲೆ(Fake document) ನೀಡಿ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಕುಟುಂಬಗಳ ಶೋಧ ಕಾರ್ಯಕ್ಕೆ ಇಳಿದಿದ್ದು, ಇಷ್ಟರಲ್ಲೇ ಎಲ್ಲಾ ಅನರ್ಹ ಬಿಪಿಎಲ್ ಕಾರ್ಡ್‌ಗಳೂ ರದ್ದಾಗಲಿವೆ.

WhatsApp Group Join Now
Telegram Group Join Now

ಈ ಹಿನ್ನಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಅವರು ಅರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡುವ ದಿಸೆಯಲ್ಲಿ ಸಂಬ೦ಧಪಟ್ಟ ಎಲ್ಲಾ ಇಲಾಖೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿರುವ ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಡ್ ಪಡೆದವರು ಸಿಕ್ಕಿ ಬೀಳಲಿದ್ದಾರೆ ಎಂದಿದ್ದಾರೆ.

ಈ ಸುದ್ದಿ ಓದಿ:- PM Usha Scholarship: PUC ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ 52,000 ಆರ್ಥಿಕ ನೆರವು.!

ಹಾಗಾದರೆ, ಈತನಕ ರದ್ದಾದ ಬಿಪಿಎಲ್ ಕಾರ್ಡ್‌ಗಳೆಷ್ಟು? ರದ್ದಾಗಬೇಕಿರುವ ಕಾರ್ಡ್‌ಗಳೆಷ್ಟು? ನಕಲಿ ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಶಿಕ್ಷೆ ಏನು? ಯಾವೆಲ್ಲ ಬಿಪಿಎಲ್ ರೇಷನ್ ಕಾರ್ಡ್ಗಳು ಎಪಿಎಲ್ ರೂಪ ಪಡೆಯಲಿವೆ? ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…

ನಿಯಮ ಉಲ್ಲಂಘಿಸಿದವರ ಶೋಧ

ತೀರಾ ಬಡ ಕುಟುಂಬಗಳಿಗೆ೦ದು ಮೀಸಲಾಗಿರುವ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಪಡೆಯಲು ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಆದರೆ ರಾಜ್ಯದಲ್ಲಿ ಲಕ್ಷಾಂತರ ಜನ ಉಳ್ಳವರು ಈ ಮಾನದಂಡಗಳಿಗೆ ವಿರುದ್ಧವಾಗಿ ಸುಳ್ಳು ದಾಖಲೆಗಳನ್ನು ನೀಡಿ, ಅಂತ್ಯೋದಯ ಹಾಗೂ ಪಿಎಲ್ ಕಾರ್ಡ್ ಪಡೆದಿದ್ದಾರೆ.

ಆಹಾರ ಇಲಾಖೆ ಬಹಳ ಹಿಂದಿನಿ೦ದಲೂ ಇಂಥವರ ಶೋಧ ಕಾರ್ಯ ನಡೆಸುತ್ತಿದೆ. ಆದಾಯ ತೆರಿಗೆ ಪಾವತಿಸುವವರು, ಐಷಾರಾಮಿ ವಾಹನ ಹೊಂದಿರುವವರು, 3 ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವವರು, ಸರಕಾರಿ ನೌಕರಿಯಲ್ಲಿರುವವರು, ಬಾಡಿಗೆ ಮನೆಗಳನ್ನು ಹೊಂದಿರುವವರನ್ನು ಶೋಧಿಸಿ ಅಂಥರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ.

ಸಿಕ್ಕಿ ಬಿದ್ದರೆ ಶಿಕ್ಷೆ ಏನು?

ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದವರು ಖುದ್ದಾಗಿ ಕಾರ್ಡ್ ಹಿಂತಿರುಗಿಸಬೇಕು. ತಾವಾಗೇ ಹಿಂತಿರುಗಿಸದಿದ್ದರೆ ಸರ್ಕಾರ ಅಂಥವರನ್ನು ಪತ್ತೆ ಮಾಡುತ್ತದೆ. ಆಗ ಸಿಕ್ಕಿ ಬಿದ್ದರೆ ಕಾರ್ಡ್ ರದ್ದಾಗುವುದು ಮಾತ್ರವಲ್ಲ, ದಂಡ, ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.

ಶೋಧ ಕಾರ್ಯದಲ್ಲಿ ಸಿಕ್ಕಿ ಬೀಳುವವರಿಗೆ ನಕಲಿ ರೇಷನ್ ಕಾರ್ಡ್ ಬಳಸಿಕೊಂಡು ಈತನಕ ಎಷ್ಟು ಪಡಿತರ ಧಾನ್ಯ ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಕೆಜಿಗೆ 35 ರೂಪಾಯಿನಂತೆ ವಸೂಲಿ ಮಾಡಲಾಗುತ್ತದೆ. ಜೊತೆಗೆ ಕ್ರಿಮಿನಲ್ ಕೇಸ್ ಕೂಡ ದಾಖಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಅನರ್ಹ ಬಿಪಿಎಲ್ ಕಾರ್ಡ್‌ಗಳಿಗೆ ಎಪಿಎಲ್ ರೂಪ

ಇನ್ನೊಂದೆಡೆ ಆಹಾರ ಸಚಿವ ಮುನಿಯಪ್ಪ ಅವರು ‘ಅರ್ಹರಲ್ಲದವರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂತಹ ಕಾರ್ಡ್ಗಳನ್ನು ರದ್ದುಪಡಿಸುವುದಿಲ್ಲ. ಬದಲಿಗೆ ಎಪಿಎಲ್ ಆಗಿ ಪರಿವರ್ತಿಸುತ್ತೇವೆ’ ಎಂದಿದ್ದಾರೆ. ಈಗಾಗಲೇ 2018 ರಿಂದ 2020ರ ವರೆಗೆ 12.47 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಈ ತನಕ 9,301 ಅಂತ್ಯೋದಯ, 10,18,963 ಬಿಪಿಎಲ್ ಕಾರ್ಡ್’ಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದ್ದು; ಇನ್ನೂ ಅರ್ಹತೆ ಇಲ್ಲದ 2.18 ಲಕ್ಷಕ್ಕೂ ಹೆಚ್ಚು ಮಂದಿ ಎಪಿಎಲ್ ಕಾರ್ಡ್ಗಳನ್ನು ಪಡೆದಿದ್ದಾರೆ. ಅವುಗಳ ರದ್ದತಿ ಕಾರ್ಯವೂ ಚುರುಕುಗೊಂಡಿದೆ.

50 ಲಕ್ಷ ನಕಲಿ ರೇಷನ್ ಕಾರ್ಡ್ ರದ್ದು

ಆಹಾರ ಇಲಾಖೆ ಮಾಹಿತಿ ಪ್ರಕಾರ ನಕಲಿ ದಾಖಲೆಗಳನ್ನು ನೀಡಿ ಪಡೆದಿರುವ 12.47 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಇವುಗಳಲ್ಲಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಕಾರ್ಡ್ಗಳು ರದ್ದಾಗಿವೆ. ಇತ್ತ ದಕ್ಷಿಣ ಕನ್ನಡ, ಚಿತ್ರದುರ್ಗ, ವಿಜಯಪುರ, ಮೈಸೂರು ಜಿಲ್ಲೆಗಳಲ್ಲಿ ಸರಿಸುಮಾರು ಒಂದು ಲಕ್ಷ ಕಾರ್ಡ್‌ಗಳು ರದ್ದುಗೊಂಡಿವೆ ಎನ್ನಲಾಗುತ್ತಿದೆ.

ಈ ಸುದ್ದಿ ಓದಿ:-Mahila Samman Scheme: ಪೋಸ್ಟ್ ಆಫೀಸ್ ನಲ್ಲಿ ಕೇವಲ 1000 ರೂಪಾಯಿ ಕಟ್ಟಿ 2.5 ಲಕ್ಷ ಪಡೆಯಿರಿ.!

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಅನರ್ಹ ಪಡಿತರ ಚೀಟಿ ತಡೆಗೆ ಪ್ರತಿಯೊಬ್ಬರಿಗೂ ಇ-ಕೆವೈಸಿ (ಆಧಾರ್ ದೃಢೀಕರಣ) ಕಡ್ಡಾಯಗೊಳಿಸಲಾಗಿದೆ. ಆಧಾರ್ ದೃಢೀಕರಣದಲ್ಲಿಯೇ ಅನರ್ಹರು ಸುಲಭವಾಗಿ ಬೀಳುತ್ತಿದ್ದಾರೆ. ಹೀಗೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಿದರೆ ರಾಜ್ಯಾದ್ಯಂತ ಬರೋಬ್ಬರಿ 50 ಲಕ್ಷ ನಕಲಿ ರೇಷನ್ ಕಾರ್ಡ್’ಗಳು ರದ್ದಾಗಲಿವೆ ಎನ್ನಲಾಗುತ್ತಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment